ಓಲೆಗೊಂದು ಓಲೆ

ಕನಸು

ಕಂಡೆನು ಓಲೆಗೆ ಓಲೆಯನು
ಅಂಧಳ ನಡಸುವ ಕೋಲಿದನು
ಜಾತ್ರೆಗೆ ಕರೆಯುವ ಭ್ರಾತೃವನು

ಕುರುಡಿಗೆ ಕಂಗಳ ತರಿಸುವನು
ಪರಿಶೆಗೆ ನಾನಿದೊ ಹೊರಡುವೆನು
ಬಯಸಿದ ಅಣ್ಣನೆ ದೊರೆತಿಹನು

ವಿಷಯದ ವಿಷಮವ ತಳ್ಳುವೆನು
ಚಂಗನೆ ನೆಗೆಯುತ ಹಾರುವೆನು
ಜೀವದ ಪುರದೊಳು ನುಗ್ಗುವೆನು

ಡುಮುಡುಮು ವಾದ್ಯವ ಕೇಳುವೆನು
ತೇರಿನ ಬಾವುಟಕೇರುವೆನು
ಕದಳೀ ದವನವ ಸೂಡುವೆನು

ಭಾವದ ಶಿಖರವ ಸೇರುವೆನು
ಕಮಲದ ಸಾರವ ಹೀರುವೆನು
ಅಣ್ಣನ ಭವನವ ಕಾಣುವೆನು

ಮಿಂಚಿನ ಆಚೆಗೆ ಕರೆಯುವನು
ಕಾಣದ ಒಗಟೆಯ ಬಿಚ್ಚುವನು
ಏನನೊ ಏನನೊ ತೋರುವನು

ಮಾನಸಪುತ್ರನು ನಮ್ಮಣ್ಣ
ಆಗಸದೇಹಿಯು ನಮ್ಮಣ್ಣ
ಭಾವದ ಸಾಗರ ನಮ್ಮಣ್ಣ

ಕುಸಿದರೆ ಅಣ್ಣನೆ ನಡಸುವನು
ಹಸಿದರೆ ಅಣ್ಣನೆ ಉಣಿಸುವನು
ಧನ್ಯಳು ಜನಕಜೆ ಇನ್ನೇನು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದುಕೆಂದರೆ…
Next post ದೆವ್ವಗಳ ಹೋರಾಟ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys